ಉತ್ತಿಷ್ಠಭಾರತ (Uttishtabharatha) ಸುದ್ದಿ ಜಾಲತಾಣ ವರದಿ: ಯಾವುದೆ ಕೆಲಸ ಕೈಗೊಳ್ಳುವ ಮೊದಲು ತನ್ನ ಯೋಗ್ಯತೆಯನ್ನು ಅರಿತುಕೊಳ್ಳುವುದು ಜಾಣರ ಲಕ್ಷಣವಾಗಿದೆ.
ಆದರೆ, ನೆರೆಯ ಬಾಂಗ್ಲಾದೇಶವು ಭಾರತದಂತಹ ದೈತ್ಯ ರಾಷ್ಟ್ರವನ್ನು ಎದುರು ಹಾಕಿಕೊಳ್ಳುವ ಮುನ್ನ ತನ್ನ ಸಾಮರ್ಥ್ಯವನ್ನು ಸರಿಯಾಗಿ ಅಳೆಯದಂತಿದೆ.
ಈ ಬೆಳವಣಿಗೆ ಪ್ರಾದೇಶಿಕ ರಾಜಕೀಯ ಹಾಗೂ ರಾಜತಾಂತ್ರಿಕ ವಲಯದಲ್ಲಿ ಚರ್ಚೆಗೆ ಕಾರಣವಾಗುತ್ತಿದೆ.
ಭಾರತ ವಿರೋಧಿ ಮನೋಭಾವನೆಯಲ್ಲಿ ತೇಲಾಡುತ್ತಿರುವ ಬಾಂಗ್ಲಾದೇಶ, ದಿನಕ್ಕೊಂದು ಆಟಗಳನ್ನು ಆಡುತ್ತಿದೆ. ಬಾಂಗ್ಲಾದೇಶದ ತೀವ್ರಗಾಮಿ ಸಂಘಟನೆ ಇಂಕ್ವಿಲಾಬ್ ಮಂಚ್ ಬಾಂಗ್ಲಾದೇಶದಲ್ಲಿ ಕೆಲಸ ಮಾಡುತ್ತಿರುವ ಭಾರತೀಯರ ಕೆಲಸದ ಪರವಾನಗಿಗಳನ್ನು ರದ್ದುಗೊಳಿಸುವಂತೆ ಮುಹಮ್ಮದ್ ಯೂನಸ್ ಸರ್ಕಾರವನ್ನು ಒತ್ತಾಯಿಸಿದೆ.
ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಪ್ರತಿಭಟನೆಗಳು ಕೊನೆಯಾಗುವ ಲಕ್ಷಣ ಕಂಡುಬರುತ್ತಿಲ್ಲ. ಅಲ್ಲಿನ ಮೂಲಭೂತವಾದಿ ಸಂಘಟನೆಗಳಲ್ಲಿ ಭಾರತ ವಿರೋಧಿ ಮನೋಭಾವನೆ ಹೆಚ್ಚುತ್ತಿದ್ದು, ಇದೀಗ ಭಾರತೀಯ ಕೆಲಸಗಾರರ ಮೇಲೆ ತಮ್ಮ ವಕ್ರದೃಷ್ಟಿ ಬೀರಿವೆ.
ಬಾಂಗ್ಲಾದೇಶದಲ್ಲಿ ಕೆಲಸ ಮಾಡುತ್ತಿರುವ ಭಾರತೀಯರ ಕೆಲಸದ ಪರವಾನಗಿಗಳನ್ನು ರದ್ದುಗೊಳಿಸುವಂತೆ ಒತ್ತಾಯ ಮಾಡಲಾಗುತ್ತಿದೆ.
ಹೌದು, ಬಾಂಗ್ಲಾದೇಶದಲ್ಲಿ ಕೆಲಸ ಮಾಡುತ್ತಿರುವ ಭಾರತೀಯರ ವರ್ಕ್ ಪರ್ಮಿಟ್ಗಳನ್ನು ರದ್ದಗೊಳಿಸುವಂತೆ ತೀವ್ರಗಾಮಿ ಸಂಘಟನೆ ಇಂಕ್ವಿಲಾಬ್ ಮಂಚ್ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವನ್ನು ಒತ್ತಾಯಿಸಿದೆ.
ಇತ್ತೀಚಿಗೆ ಹತ್ಯೆಗೀಡಾದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಇಂಕ್ವಿಲಾಬ್ ಮಂಚ್ ಸಂಘಟನೆಯನ್ನು ಸ್ಥಾಪಿಸಿದ್ದ ಎಂಬುದು ಇಲ್ಲಿ ಉಲ್ಲೇಖನೀಯ.
ಪಾಕಿಸ್ತಾನದಿಂದ ತನಗೆ ಸ್ವಾತಂತ್ರ್ಯ ಕೊಡಿಸಿದ ಅದೇ ಭಾರತದ ವಿರುದ್ಧ ಬಾಂಗ್ಲಾದೇಶದಲ್ಲಿ ಈಗ ಪ್ರತಿಭಟನೆಗಳು ನಡೆಯುತ್ತಿವೆ. ಭಾರತದ ವಿರುದ್ಧ ಅಲ್ಲಿನ ಮೂಲಭೂತವಾದಿ ಸಂಘಟನೆಗಳು ವಿಷಕಾರುತ್ತಿವೆ.
ಇದಕ್ಕೆ ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರ ಮೌನ ಸಮ್ಮತಿ ಕೂಡ ಇದೆ. ಇದು ಬಾಂಗ್ಲಾದೇಶದ ಬದಲಾದ ನಿಲುವಿಗೆ ಜ್ವಲಂತ ಸಾಕ್ಷಿಯಾಗಿದೆ.
ಬಾಂಗ್ಲಾದೇಶದಲ್ಲಿ ವರ್ಕ್ ಪರ್ಮಿಟ್ ರದ್ದು
ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಮುಂದುವರೆದಿದೆ. ಈ ಅಮಾನವೀಯ ದಾಳಿಗಳ ಬಗ್ಗೆ ಮೌನವಾಗಿರುವ ಯೂನಸ್ ಸರ್ಕಾರ, ದೇಶದಲ್ಲಿ ಭಾರತ ವಿರೋಧಿ ಭಾವನೆ ಹೆಚ್ಚು ಹೆಚ್ಚು ಬೇರೂರಲಿ ಎಂದು ಬಯಸಿದೆ.
ಫೆಬ್ರವರಿ 2026ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಾಗಿ ಇಷ್ಟೆಲ್ಲಾ ನಾಟಕವಾಡಲಾಗುತ್ತಿದ್ದು, ಮೂಲಭೂತವಾದಿಗಳ ಅಟ್ಟಹಾಸಕ್ಕೆ ಬೆಂಬಲವಾಗಿ ನಿಂತಿದೆ.
ಬಾಂಗ್ಲಾದೇಶವು ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಪ್ರಕ್ರಿಯೆಗಳ ಬಗ್ಗೆ ತೀವ್ರವಾಗಿ ಅಸಹಿಷ್ಣುತೆ ಹೊಂದುತ್ತಿರುವ ಲಕ್ಷಣಗಳು ಕಂಡುಬರುತ್ತಿವೆ.
ಅಲ್ಲಿನ ತೀವ್ರಗಾಮಿ ಗುಂಪುಗಳು ಚುನಾವಣೆಗೆ ಮುನ್ನ ಅಧಿಕಾರಕ್ಕಾಗಿ ಯಾವ ಹಂತಕ್ಕಾದರೂ ಇಳಿಯಬಹುದು.
ಭಾರತೀಯರ ಕೆಲಸದ ಪರವಾನಗಿ ರದ್ದತಿಯ ಒತ್ತಾಯ ಕೂಡ ಇದರ ಭಾಗ ಎಂದು ಅನೇಕ ರಾಜಕೀಯ ವಿಶ್ಲೇಷಕರು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರತಿದಿನ, ಬಾಂಗ್ಲಾದೇಶದ ಅಧಿಕಾರಿಗಳು ತಮ್ಮ ದೇಶಕ್ಕೆ ಸಂಭವಿಸಿದ ಎಲ್ಲಾ ದುಷ್ಪರಿಣಾಮಗಳಿಗೆ ಭಾರತವನ್ನು ದೂಷಿಸುತ್ತಾ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಆದರೆ ತಮ್ಮ ದೇಶದ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಮೂಲಭೂತವಾದಿಗಳು ಹಿಡಿತ ಸಾಧಿಸುತ್ತಿರುವ ಬಗ್ಗೆ ಮೌನವಾಗಿದ್ದಾರೆ. ಇದು ಯೂಬನಸ್ ಸರ್ಕಾರದ ದ್ವಂದ್ವ ನೀತಿಗೆ ಸಾಕ್ಷಿಯಾಗಿದೆ.
ಉಸ್ಮಾನ್ ಹಾದಿ ಹಾದಿ ಹತ್ಯೆಯ ಇಬ್ಬರು ಪ್ರಮುಖ ಆರೋಪಿಗಳು, ಭಾರತದ ಈಶಾನ್ಯ ರಾಜ್ಯ ಮೇಘಾಲಯಕ್ಕೆ ಪರಾರಿಯಾಗಿದ್ದಾರೆ ಎಂದು ಬಾಂಗ್ಲಾದೇಶದ ಪೊಲೀಸರು ಆರೋಪಿಸಿದ್ದಾರೆ.
ಅಂದರೆ ಬಾಂಗ್ಲಾದೇಶವು ಹಾದಿ ಹತ್ಯೆಯ ಆರೋಪ ಭಾರತದ ಮೇಲೆ ಹೊರಿಸಲು ಪ್ರಯತ್ನಿಸುತ್ತಿದೆ. ಆದರೆ ಭಾರತ ಈ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ.
ಆದಾಗ್ಯೂ, ಬಾಂಗ್ಲಾದೇಶದ ಪೊಲೀಸರು ಪದೇ ಪದೇ ಹಾದಿ ಹತ್ಯೆಯ ಪ್ರಮುಖ ಆರೋಪಿಗಳು ಮೇಘಾಲಯದಲ್ಲಿದ್ದಾರೆ ಎಂದು ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ.
ಹಾದಿ ಮೇಲಿನ ದಾಳಿಯ ಕುರಿತು ಡಿಸೆಂಬರ್ 14 ರಂದು, ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ನೀಡಿದ ಅಸಂಬದ್ಧ
ಹೇಳಿಕೆಗಳನ್ನು ಭಾರತ ಸ್ಪಷ್ಟವಾಗಿ ತಿರಸ್ಕರಿಸುತ್ತದೆ ಎಂದು ವಿದೇಶಾಂಗ ಸಚಿವಾಲಯ ಕಳೆದ ವಾರದ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.



