ಉತ್ತಿಷ್ಠಭಾರತ (Uttishtabharatha) ಸುದ್ದಿ ಜಾಲತಾಣ ವರದಿ: ಭಾರತೀಯ ಸಶಸ್ತ್ರ ಪಡೆಗಳ 'ಆಪರೇಷನ್ ಸಿಂದೂರ್' ಕಾರ್ಯಾಚರಣೆಯಿಂದ ಪಾಕಿಸ್ತಾನ ತತ್ತರಿಸಿದೆ.ಈ ಕಾರ್ಯಾಚರಣೆಯ ವೇಳೆ ತನ್ನ ಪ್ರಮುಖ ನೂರ್ ಖಾನ್ ವಾಯುನೆಲೆಯ ಮೇಲೂ ದಾಳಿ ನಡೆದಿರುವುದನ್ನು ಪಾಕಿಸ್ತಾನ ಇದೇ ಮೊದಲ ಬಾರಿಗೆ ಅಧಿಕೃತವಾಗಿ ಒಪ್ಪಿಕೊಂಡಿದೆ.ಪ್ರಾದೇಶಿಕ ಭದ್ರತೆ ಹಾಗೂ ಸೈನಿಕ ಸಮತೋಲನದ ಮೇಲೆ ಈ ಬೆಳವಣಿಗೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ. ಪಹಲ್ಗಾಂವ್ನಲ್ಲಿ ಭಾರತೀಯರ ಮೇಲೆ ಉಗ್ರರ ದಾಳಿಗೆ ಪ್ರತಿಯಾಗಿ ಮೇ ತಿಂಗಳಲ್ಲಿ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ಆಪರೇಷನ್ ಸಿಂಧೂರ್...
